Monday, 13th May 2024

ನೂತನ‌ ಜಿಲ್ಲೆಗಾಗಿ ಸಚಿವ ಸ್ಥಾನದ ತ್ಯಾಗಕ್ಕೂ ಸಿದ್ಧ: ಸಚಿವ ಆನಂದ್‌ಸಿಂಗ್

ಬಳ್ಳಾರಿ: ಯಡಿಯೂರಪ್ಪ ರಾಜೀನಾಮೆ ಕೇಳಿದ್ರೇ ಆನಂದದಿಂದ ಕೊಡುವೆ. ನನಗೆ ಜಿಲ್ಲೆಯಾಗೋದು ಮುಖ್ಯವಿತ್ತು. ವಿಜಯ ನಗರ ಜಿಲ್ಲೆಯ ಮುಂದೆ ಸಚಿವ ಸ್ಥಾನ ತೃಣಕ್ಕೆ ಸಮಾನ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಹೇಳಿದರು.

ಸಚಿವ ಸಂಪುಟ ಸಭೆಯಲ್ಲಿ‌ ವಿಜಯನಗರ ಜಿಲ್ಲೆ ರಚನೆ ಬಗ್ಗೆ ತಾತ್ವಿಕ ಘೋಷಣೆ ಮಾಡಿದ ನಂತರ ಹೊಸಪೇಟೆಗೆ ಆಗಮಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಅವರು‌ ನೂತನ ಜಿಲ್ಲೆ ಘೋಷಣೆ ಮಾಡಿದ ವಿಜಯ ನಗರದ ವೀರಪುತ್ರರಾಗಿದ್ದಾರೆ.

ಮನೆಯಲ್ಲಿ ಅಣ್ಣತಮ್ಮಂದಿರು ಬೇರೆಯಾದರೆ ನೋವು ಇರುತ್ತದೆ. ಹಾಗೆ ಜಿಲ್ಲೆ ವಿಭಜನೆ ಆದರೆ ಒಂದಿಷ್ಟು ಭಿನ್ನಾಭಿಪ್ರಾಯ ಸಹಜ‌ ಎಂದರು. ಶಾಸಕ ಸೋಮಶೇಖರ ರೆಡ್ಡಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅವರ ಜೊತೆಗೆ ಮಾತನಾಡುವೆ.‌ ಈಗಾಗಲೇ ಯಡಿಯೂರಪ್ಪ ಕೂಡ ಸೋಮಶೇಖರ ರೆಡ್ಡಿ ಜೊತೆ ಮಾತನಾಡಿದ್ದಾರೆ.

ಜಿಲ್ಲೆಯ ವಿಚಾರದಲ್ಲಿ ಪ್ರತಿಷ್ಠೆ ಬೇಡ ನಾವೆಲ್ಲರೂ ಅಣ್ಣ ತಮ್ಮಂದಿರು ಎನ್ನುವ ಮೂಲಕ ಸೋಮಶೇಖರ ರೆಡ್ಡಿ ಮನವೊಲಿಸೋ ಯತ್ನವನ್ನು ಆನಂದ ಸಿಂಗ್‌ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!