Kapil Sharma:"ಕೆನಡಾದಲ್ಲಿ ಹಿಂದುತ್ವ ಪ್ರಚಾರ ಮಾಡಬೇಡಿ"; ಕಪಿಲ್ ಶರ್ಮಾಗೆ ಬೆದರಿಕೆ ಹಾಕಿದ ಪನ್ನು
ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕೆಫೆಯ ಮೇಲೆ ಇತ್ತೀಚೆಗೆ ದಾಳಿ ನಡೆದಿದೆ. ಇದೀಗ ಮತ್ತೆ ಕಪಿಲ್ಗೆ ಸಂಕಷ್ಟ ಎದುರಾಗಿದೆ. ದಾಳಿಯ ಕೆಲವು ದಿನಗಳ ನಂತರ, ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಕಪಿಲ್ ಶರ್ಮಾ ಅವರಿಗೆ ಬೆದರಿಕೆ ಹಾಕಿದ್ದಾನೆ.


ಒಟ್ಟಾವಾ: ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ (Kapil Sharma) ಅವರ ಕೆಫೆಯ ಮೇಲೆ ಇತ್ತೀಚೆಗೆ ದಾಳಿ ನಡೆದಿದೆ. ಇದೀಗ ಮತ್ತೆ ಕಪಿಲ್ಗೆ ಸಂಕಷ್ಟ ಎದುರಾಗಿದೆ. ದಾಳಿಯ ಕೆಲವು ದಿನಗಳ ನಂತರ, ಖಲಿಸ್ತಾನಿ ಪರ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ಕಪಿಲ್ ಶರ್ಮಾ ಅವರಿಗೆ ಬೆದರಿಕೆ ಹಾಕಿದ್ದಾನೆ. ಕ್ಯಾಪ್ಸ್ ಕೆಫೆ ಎಂದು ಹೆಸರಿಸಲಾದ ಈ ಕೆಫೆಯನ್ನ ಕೆಲ ದಿನಗಳ ಹಿಂದೆಯಷ್ಟೇ ತೆಗೆಯಲಾಗಿತ್ತು. ಕಪಿಲ್ ಶರ್ಮಾ ಹಾಗೂ ಅವರ ಪತ್ನಿ ಈ ಕೆಫೆಯನ್ನು ನಡೆಸುತ್ತಿದ್ದರು.
ಇದೀಗ ಪನ್ನು ಕಪಿಲ್ಗೆ ಬೆದರಿಕೆ ಹಾಕಿದ್ದಾನೆ. ಕೆನಡಾದಲ್ಲಿ ವ್ಯವಹಾರ ಮಾಡುವ ನೆಪದಲ್ಲಿ ಕಪಿಲ್ ಶರ್ಮಾ ಹಿಂದುತ್ವವನ್ನು ಉತ್ತೇಜಿಸುತ್ತಿದ್ದಾರೆ ಎಂದು ವೀಡಿಯೊ ಸಂದೇಶದಲ್ಲಿ ಆರೋಪಿಸಿದ್ದಾರೆ ಮತ್ತು ದೇಶವು ತನ್ನ ನೆಲದಲ್ಲಿ ಅಂತಹ ಆಲೋಚನೆಗಳು ರೂಪುಗೊಳ್ಳಲು ಬಿಡುವುದಿಲ್ಲ ಎಂದು ಪನ್ನು ಹೇಳಿದ್ದಾನೆ. "ಕೆನಡಾ ನಿಮ್ಮ ಆಟದ ಮೈದಾನವಲ್ಲ. ನಿಮ್ಮ ರಕ್ತದ ಹಣವನ್ನು ಹಿಂದೂಸ್ತಾನಕ್ಕೆ ಹಿಂತಿರುಗಿಸಿ. ಕೆನಡಾದ ನೆಲದಲ್ಲಿ ವ್ಯಾಪಾರದ ನೆಪದಲ್ಲಿ ಹಿಂಸಾತ್ಮಕ ಹಿಂದುತ್ವ ಸಿದ್ಧಾಂತ ಬೇರೂರಲು ಕೆನಡಾ ಬಿಡುವುದಿಲ್ಲ" ಎಂದು ವಿಡಿಯೋ ಒಂದನ್ನು ಬಿಡುಗಡೆ ಮಾಡಲಾಗಿದೆ. ಕ್ಯಾಪ್ಸ್ ಕೆಫೆ "ಕೇವಲ ಹಾಸ್ಯ ಸ್ಥಳವೇ ಅಥವಾ ಹಿಂದುತ್ವವನ್ನು ರಫ್ತು ಮಾಡುವ ದೊಡ್ಡ ಪಿತೂರಿಯ ಭಾಗವೇ" ಎಂದು ಪನ್ನುನ್ ಪ್ರಶ್ನಿಸಿದ್ದಾನೆ.
ಭಾರತದಿಂದ ಭಯೋತ್ಪಾದಕ ಎಂದು ಹೆಸರಿಸಲ್ಪಟ್ಟ ಬಿಕೆಐ ಕಾರ್ಯಕರ್ತ ಹರ್ಜಿತ್ ಸಿಂಗ್ ಲಡ್ಡಿ ವೀಡಿಯೊ ಸಂದೇಶದಲ್ಲಿ ಕಪಿಲ್ ಶರ್ಮಾ ಅವರ ಕೆಫೆಯ ಮೇಲಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ. ಲಡ್ಡಿ ಭಾರತದ ಮೋಸ್ಟ್ ವಾಟೆಂಟ್ ಉಗ್ರನಾಗಿದ್ದಾನೆ. ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು, ಹಿಂದೂ ನಾಯಕ ಹತ್ಯೆ ಹಿಂದೆ ಈತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಎಪ್ರಿಲ್ 13, 2024ರಲ್ಲಿ ವಿಶ್ವ ಹಿಂದೂಪರಿಷತ್ ಪ್ರಭಾಕರ್ ಮೇಲೆ ಪಂಜಾಬ್ನ ನಂಗಾಲ್ನಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿ ಹಿಂದೆ ಇದೆ ಲಡ್ಡಿ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. 2023ರಲ್ಲಿ ಲಡ್ಡಿ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು.
ಈ ಸುದ್ದಿಯನ್ನೂ ಓದಿ: Hina Rabbani Khar: ಹಫೀಜ್ ಅಬ್ದುರ್ ರೌಫ್ ಭಯೋತ್ಪಾದಕನಲ್ಲ ಎಂದ ಪಾಕ್ ಮಾಜಿ ಸಚಿವೆ ಹಿನಾ ರಬ್ಬಾನಿ ಖಾರ್
ದಾಳಿ ಬಳಿಕ ಕುರಿತು ಮೊದಲ ಬಾರಿಗೆ ಮಾತನಾಡಿದ ಕಪಿಲ್ ರುಚಿಕರವಾದ ಕಾಫಿ ಮತ್ತು ಸ್ನೇಹಪರ ಸಂಭಾಷಣೆಗಳ ಮೂಲಕ ಜನರಿಗೆ ಸಂತೋಷವನ್ನು ತರುವ ಭರವಸೆಯೊಂದಿಗೆ ನಾವು ಕ್ಯಾಪ್ಸ್ ಕೆಫೆಯನ್ನು ತೆರೆದಿದ್ದೇವೆ. ಆ ಕನಸಿಗೆ ಪೆಟ್ಟು ಬಿದ್ದರೆ ನಾವು ಅದನ್ನು ಸಹಿಸುವುದಿಲ್ಲ. ನಾವು ಮತ್ತೆ ಎದ್ದು ನಿಲ್ಲುತ್ತೇವೆ. ಅದೇ ಜಗದಲ್ಲಿ ಮರಳಿ ಕೆಫೆ ಪ್ರಾರಂಭಿಸುತ್ತೇವೆ. ಯಾವುದಕ್ಕೂ ಭಯ ಪಡುವುದಿಲ್ಲ ಎಂದು ಹೇಳಿದ್ದರು.