ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Janapada Academy Award: 30 ಕಲಾವಿದರು, ತಜ್ಞರು ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದೆ. ಈ ಪ್ರತಿಷ್ಠಿತ ಪ್ರಶಸ್ತಿಗೆ 30 ಜಿಲ್ಲೆಗಳ 30 ಕಲಾವಿದರನ್ನು ಮತ್ತು ತಜ್ಞರನ್ನು ಆಯ್ಕೆ ಮಾಡಲಾಗಿದೆ. 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಮಾ. 15ರಂದು ಬೀದರ್ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದ್ದಾರೆ.

30 ಕಲಾವಿದರು, ತಜ್ಞರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ

Profile Ramesh B Mar 1, 2025 9:42 PM

ಬೆಂಗಳೂರು: ಜಾನಪದ ಅಕಾಡೆಮಿ 2024ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಿದೆ. ವಾರ್ಷಿಕ ಗೌರವ ಪ್ರಶಸ್ತಿಗೆ 30 ಜಿಲ್ಲೆಗಳ 30 ಕಲಾವಿದರನ್ನು ಮತ್ತು ತಜ್ಞರನ್ನು ಆಯ್ಕೆ ಮಾಡಲಾಗಿದೆ (Janapada Academy Award). ಜಾನಪದ ಕಲಾವಿದರಿಗೆ 25 ಸಾವಿರ ರೂ.ಮೊತ್ತ, ತಜ್ಞರಿಗೆ 50 ಸಾವಿರ ರೂ.ಗಳ ನಗದು, ಹಾರ, ಫಲತಾಂಬೂಲ ನೀಡಿ ಗೌರವಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ತಿಳಿಸಿದರು. 2023 ಮತ್ತು 2024ನೇ ಸಾಲಿನ ಪ್ರಶಸ್ತಿ ಪುರಸ್ಕೃತರಿಗೆ ಮಾ. 15ರಂದು ಬೀದರ್ ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.

ಪ್ರಶಸ್ತಿಗೆ ಆಯ್ಕೆಯಾದ ತಜ್ಞರು

ಡಾ. ಜೀ.ಶಂ.ಪ. ಪ್ರಶಸ್ತಿಗೆ ಮೈಸೂರಿನ ವಿದ್ವಾಂಸ ಡಾ.ಮೈಲಹಳ್ಳಿ ರೇವಣ್ಣ, ಡಾ. ಬಿ.ಎಸ್.ಗದ್ದಿಗಿಮಠ ಪ್ರಶಸ್ತಿಗೆ ವಿಜಯನಗರ ಜಿಲ್ಲೆಯ ವಿದ್ವಾಂಸ ಡಾ. ವೆಂಕಟೇಶ್​ ಇದ್ವಾಡಿ ಆಯ್ಕೆಯಾಗಿದ್ದಾರೆ ಎಂದು ಗೊಲ್ಲಹಳ್ಳಿ ಶಿವಪ್ರಸಾದ್ ಮಾಹಿತಿ ನೀಡಿದರು.



ಪ್ರಶಸ್ತಿಗೆ ಆಯ್ಕೆಯಾದ ಕಲಾವಿದರು

ಜಾನಪದ ಗಾಯಕ ಡಾ. ಜೋಗಿಲ ಸಿದ್ದರಾಜು (ಬೆಂಗಳೂರು ನಗರ), ತತ್ವಪದ ಮತ್ತು ಗೀಗಿ ಪದ ಗಾಯಕ ಸಿದ್ದಯ್ಯ ಸಿ.ಎಚ್​. (ಬೆಂಗಳೂರು ಗ್ರಾಮಾಂತರ), ಡೊಳ್ಳು ಕುಣಿತ ಕಲಾವಿದ ಎಂ.ಮಹೇಶ್ (ರಾಮನಗರ)​, ಕೋಲಾಟ ಕಲಾವಿದೆ ಸುನಂದಮ್ಮ (ಕೋಲಾರ), ಅರೆ ವಾದ್ಯ, ತಮಟೆ ಕಲಾವಿದ ವೆಂಕಟರಮಣಪ್ಪ(ಗೋಟ್ಲುಗುಂಟೆ ವೆಂಕಟರಮಣಪ್ಪ) (ಚಿಕ್ಕಬಳ್ಳಾಪುರ), ಕಿನ್ನರ ಜೋಗಿ ಕಲಾವಿದ ಸಿದ್ದಪ್ಪ (ತುಮಕೂರು).

ಭಜನೆ ಕಲಾವಿದ ಮಾರ್ತಾಂಡಪ್ಪ(ದಾವಣಗೆರೆ), ಹಗಲು ವೇಷ ಕಲಾವಿದ ಎ. ಶ್ರೀನಿವಾಸ್ (ಚಿತ್ರದುರ್ಗ)​, ಹಸೆ ಚಿತ್ತಾರ ಕಲಾವಿದೆ ಗೌಡಮ್ಮ (ಶಿವಮೊಗ್ಗ), ಚರ್ಮವಾದ್ಯ ನಗಾರಿ ಕಲಾವಿದ ಸಿ.ಮಂಜುನಾಥ್ (ಮೈಸೂರು)​, ಜಾನಪದ ಗಾಯಕ ಹುರುಗಲವಾಡಿ ರಾಮಯ್ಯ (ಮಂಡ್ಯ), ಕೋಲಾಟ ಕಲಾವಿದ ಬಿ.ಟಿ. ಮಾನವ ( ಹಾಸನ), ಭಜನೆ ಕಲಾವಿದ ಬಿ.ಪಿ. ಪರಮೇಶ್ವರಪ್ಪ (ಚಿಕ್ಕಮಗಳೂರು), ತಂಬೂರಿ ಪದ ಗಾಯಕ ಸಿದ್ದರಾಜು ಆರ್​. (ಚಾಮರಾಜನಗರ), ಪಾಡ್ದಾನ​ ಕಲಾವಿದೆ ಜಯಂತಿ (ದಕ್ಷಿಣ ಕನ್ನಡ), ಜಾನಪದ ಕಲಾವಿದ ಎನ್​.ಗಣೇಶ್​ ಗಂಗೊಳ್ಳಿ (ಉಡುಪಿ), ಬುಡಕಟ್ಟು ಕೋಲಾಟ ಕಲಾವಿದೆ ಎಸ್​.ಆರ್​ಸರೋಜಾ (ಕೊಡಗು).

ಚೌಡಕಿ ಪದ ಗಾಯಕಿ ಕಮಲಾ ಮರಗನ್ನವರ (ಬೆಳಗಾವಿ), ಜಾನಪದ ಸಂಗೀತ ಕಲಾವಿದ ಪ್ರಭು ಬಸಪ್ಪ ಕುಂದರಗಿ (ಧಾರವಾಡ), ಡೊಳ್ಳು ಕುಣಿತ ಕಲಾವಿದ ಸೋಮಣ್ಣ ದುಂಡಪ್ಪ ಧನಗೊಂಡ (ವಿಜಯಪುರ), ಕರಡಿ ಮಜಲು ಕಲಾವಿದ ಗಂಗಪ್ಪ ಮ. ಕರಡಿ (ಬಾಗಲಕೋಟೆ), ಹಾಲಕ್ಕಿ ಸುಗ್ಗಿ ಕುಣಿತ ಕಲಾವಿದ ಗಣಪು ಬಡವಾ ಗೌಡ (ಉತ್ತರ ಕನ್ನಡ), ಸೋಬಾನೆ ಪದ ಗಾಯಕಿ ಗಿರಿಜವ್ವ ಹನುಮಪ್ಪ ಬಣಕಾರ (ಹಾವೇರಿ), ಹಗಲು ವೇಷ ಕಲಾವಿದ ಡಾ.ಗೋವಿಂದಪ್ಪ ರಾಮಚಂದ್ರಪ್ಪ ವೇಷಗಾರ (ಗದಗ).

ತತ್ವಪದ ಗಾಯಕಿ ಬೋರಮ್ಮ (ಕಲಬುರಗಿ ), ​ ಜಾನಪದ ಗಾಯಕ ಮಾರುತಿ ಕೋಳಿ (ಬೀದರ್), ತತ್ವಪದ ಗಾಯಕಿ ಯಲ್ಲಮ್ಮ (ರಾಯಚೂರು), ಭಜನೆ ಗಾಯಕ ಎಚ್​.ಚಂದ್ರಶೇಖರ್​ ಹಡಪದ (ಕೊಪ್ಪಳ), ಹಗಲು ವೇಷ ಕಲಾವಿದ ಬಳ್ಳಾರಿ ಕೆ.ಶಂಕರಪ್ಪ(ಬಳ್ಳಾರಿ) ಮತ್ತು ತತ್ವಪದ ಗಾಯಕ ಗೋಪಣ್ಣ (ಯಾದಗಿರಿ).