ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chkkaballapur Crime: ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು, ಮೃತದೇಹ ಪತ್ತೆ

ಬಾಲಕ ತನ್ನ ನೆಂಟರ ಜೊತೆಯೊಂದಿಗೆ ಮುರುಗ ಮಲ್ಲ ದರ್ಗಾ ಗೆ ಬಂದಿದ್ದು ಮಧ್ಯಾಹ್ನದ ವೇಳೆ ಕಲ್ಯಾಣಿಯಲ್ಲಿ ಸ್ನಾನ ಮಾಡಕ್ಕೆ ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ

ಕಲ್ಯಾಣಿಯಲ್ಲಿ ಮುಳುಗಿ ಬಾಲಕ ಸಾವು, ಮೃತ ದೇಹ ಪತ್ತೆ

ಕಲ್ಯಾಣಿಯಲ್ಲಿ ಸ್ನಾನ ಮಾಡಕ್ಕೆ ಹೋಗಿ ಕಾಲು ಜಾರಿ ಬಿದ್ದ ಬಾಲಕ ಮೃತಪಟ್ಟಿರುವ ಘಟನೆ ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಗ್ರಾಮದ ಸಮೀಪ  ಕಲ್ಯಾಣಿಯಲ್ಲಿ ಘಟನೆ ಸಂಭವಿಸಿದೆ.ಮೃತಪಟ್ಟ ಬಾಲಕನನ್ನು ಬೆಂಗಳೂರು ಕೆಆರ್ ಪುರಂದ ಇಲಿಯಾಸ್(೧೪ ವರ್ಷ)ಎಂದು ಗುರುತಿಸಲಾಗಿದೆ. -

Ashok Nayak
Ashok Nayak Apr 9, 2025 9:32 PM

ಚಿಂತಾಮಣಿ: ಕಲ್ಯಾಣಿಯಲ್ಲಿ ಸ್ನಾನ ಮಾಡಕ್ಕೆ ಹೋಗಿ ಕಾಲು ಜಾರಿ ಬಿದ್ದ ಬಾಲಕ ಮೃತಪಟ್ಟಿ ರುವ ಘಟನೆ ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುರುಗಮಲ್ಲ ಗ್ರಾಮದ ಸಮೀಪ ಕಲ್ಯಾಣಿಯಲ್ಲಿ ಘಟನೆ ಸಂಭವಿಸಿದೆ.ಮೃತಪಟ್ಟ ಬಾಲಕನನ್ನು ಬೆಂಗಳೂರು ಕೆಆರ್ ಪುರಂದ ಇಲಿಯಾಸ್(14 ವರ್ಷ)ಎಂದು ಗುರುತಿಸಲಾಗಿದೆ. ಬಾಲಕ ತನ್ನ ನೆಂಟರ ಜೊತೆಯೊಂದಿಗೆ ಮುರುಗ ಮಲ್ಲ ದರ್ಗಾ ಗೆ ಬಂದಿದ್ದು ಮಧ್ಯಾಹ್ನದ ವೇಳೆ ಕಲ್ಯಾಣಿಯಲ್ಲಿ ಸ್ನಾನ ಮಾಡಕ್ಕೆ ಹೋಗಿ ಕಾಲು ಜಾರಿ ಬಿದ್ದಿದ್ದಾನೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಾಲಕನ ಮೃತ ದೇಹವನ್ನು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Chikkaballapur News: ಜಾತಿ ಗಣತಿ ಮಾಡುವಾಗ ಮೂಲ ಜಾತಿ ಹೊಲೆಯ ಎಂದು ನಮೂದಿಸಲು ಮನವಿ

ಆದರೆ ಇಂದು ಮಧ್ಯಾಹ್ನ ಮೃತ ದೇಹ ಪತ್ತೆಯಾಗಿದ್ದು ಘಟನೆ ಕುರಿತು ಕೆಂಚರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.