Chikkaballapur News: ಸಹಭೋಜನದ ಮೂಲಕ ಮನುಷ್ಯ ಜಾತಿ ತಾನೊಂದೇ ವಲಂ ಎಂದ ಇ ಕಾಮರ್ಸ್ ವಿದ್ಯಾರ್ಥಿಗಳು
ಮೊಬೈಲ್ ಎಂಬ ಮಾಯಾ ಲೋಕದ ನಡುವೆ ಕಳೆದು ಹೋಗುತ್ತಿರುವ ಯುವ ಸಮೂಹದ ನಡುವೆ 12ನೇ ಶತಮಾನ ದಲ್ಲಿ ಬಸವಾದಿ ಶರಣರು ಮುನ್ನಡೆಸಿಕೊಂಡು ಬಂದಿದ್ದ ಸಹ ಭೋಜನ ಪರಿಪಾಠವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮಾಡಿರುವುದು ತುಂಬಾ ಸಂತೋಷದ ವಿಚಾರ.ಪದವಿ ವಿದ್ಯಾರ್ಥಿಗಳ ಈ ಬಗೆಯ ಬೌದ್ಧಿಕ ಬೆಳವಣಿಗೆ ನಿಜಕ್ಕೂ ಸಮಾಜಕ್ಕೆ ಮಾದರಿ

ಸಹಭೋಜನದ ಮೂಲಕ ಭಾವೈಕ್ಯತೆ ಸಾರುತ್ತಿರುವ ವಿದ್ಯಾರ್ಥಿಗಳು

ಚಿಕ್ಕಬಳ್ಳಾಪುರ: ನಗರ ಹೊರವಲಯ ಶಿಡ್ಲಘಟ್ಟ ರಸ್ತೆಯಲ್ಲಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇ ಕಾಮರ್ಸ್ ವಿದ್ಯಾರ್ಥಿಗಳು ಸೋಮವಾರ ಸಹಭೋಜನ ಮಾಡುವ ಮೂಲಕ ಮನಷ್ಯಜಾತಿ ತಾನೊಂದೇ ವಲಂ ಎಂಬ ಆದಿಕವಿ ಪಂಪನ ಮಾತಿಗೆ ಜೀವ ತುಂಬಿದರು. ರಾಜ್ಯ ಶಿಕ್ಷಣ ನೀತಿಯ ಭಾಗವಾಗಿ ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಪ್ರಾರಂಭಿಸಿರುವ ಹೊಸ ಪದವಿ ಕೋರ್ಸ್ ಇ ಕಾಮಸ್ ವಿಭಾಗದ ವಿದ್ಯಾರ್ಥಿ ಗಳು ರಾಜ್ಯಕ್ಕೆ ಮಾದರಿಯಾಗುವ ರೀತಿಯ ಅಭ್ಯಾಸವನ್ನು ರೂಪಿಸಿಕೊಂಡು ಸುದ್ದಿಯಾಗಿ ದ್ದಾರೆ.
ಸೃಷ್ಟಿಯ ವೈವಿಧ್ಯದಂತೆ ಸಂಘಜೀವಿಯಾದ ಮಾನವ ಆಧುನಿಕತೆಯ ಜಗತ್ತಿನಲ್ಲಿ ತನಗರಿ ವಿಲ್ಲದಂತೆಯೇ ಕೂಡಿ ಬಾಳುವ, ಹಂಚಿತಿನ್ನುವ, ಸೋದರತತ್ವ ಭಾವದಿಂದ ದೂರ ಸರಿಯುತ್ತಿದ್ದಾರೆ. ನಾಗರೀಕರಾಗಿ ನಾವೇ ಹೀಗೆ ಮಾಡುವುದು ಸರಿಯಲ್ಲ ಎಂದು ಭಾವಿಸಿದ ಈ ವಿದ್ಯಾರ್ಥಿಗಳು ನಾವೆಲ್ಲಾ ಒಂದೇ ಎಂದು ಹೇಳುವ ಬದಲಿಗೆ ಸಹಭೋಜನ ಎಂಬ ಕಾರ್ಯಕ್ರಮದ ಮೂಲಕ ಮಾನವತೆಗೆ ಜೀವ ತುಂಬಿದ್ದಾರೆ.
ಇದನ್ನೂ ಓದಿ: Chikkaballapur Crime: ಎರಡು ದೇವಸ್ಥಾನಗಳ ಹುಂಡಿ ಒಡೆದು ಹಣ ಕಳ್ಳತನ
ಹೌದು. ಎರಡನೇ ಸೆಮಿಸ್ಟರ್ನಲ್ಲಿ ವ್ಯಾಸಾಂಗ ಮಾಡುತ್ತಿರುವ ಇ ಕಾಮರ್ಸ್ ಪದವಿಯ 30 ಮಂದಿ ವಿದ್ಯಾರ್ಥಿಗಳು ಅವರ ಮನೆಯಿಂದ ತಂದಿರುವ ಆಹಾರವನ್ನು ಕುಲಗೋತ್ರ ಧರ್ಮಗಳ ಹಂಗಿಲ್ಲದೆ, ಶ್ರೇಷ್ಟತೆಯ ವ್ಯಸನವಿಲ್ಲದೆ ಸಹಪಾಠಿಗಳು, ಪ್ರಾಂಶುಪಾಲರು, ಉಪನ್ಯಾಸಕರೊಟ್ಟಿಗೆ ನೆಲದ ಮೇಲೆ ಕುಳಿತು ಪರಸ್ಪರ ಹಂಚಿಕೊಂಡು ತಿನ್ನುವ ಸಹ ಭೋಜನ ಮಹತ್ವವನ್ನು ನಾಗರೀಕ ಜಗತ್ತಿಗೆ ಸಾರುವ ಕೆಲಸ ಮಾಡಿರುವುದು ವಿದ್ಯಾರ್ಥಿ ಸಮೂಹದ ನಡುವೆ ಭಾರೀ ಪ್ರಶಂಸೆಗೆ ಕಾರಣವಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರಾಂಶುಪಾಲ ಜಿ.ಡಿ.ಚಂದ್ರಯ್ಯ, ಮೊಬೈಲ್ ಎಂಬ ಮಾಯಾ ಲೋಕದ ನಡುವೆ ಕಳೆದು ಹೋಗುತ್ತಿರುವ ಯುವ ಸಮೂಹದ ನಡುವೆ 12ನೇ ಶತಮಾನ ದಲ್ಲಿ ಬಸವಾದಿ ಶರಣರು ಮುನ್ನಡೆಸಿಕೊಂಡು ಬಂದಿದ್ದ ಸಹಭೋಜನ ಪರಿಪಾಠವನ್ನು ನಮ್ಮ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಮಾಡಿರುವುದು ತುಂಬಾ ಸಂತೋಷದ ವಿಚಾರ. ಪದವಿ ವಿದ್ಯಾರ್ಥಿಗಳ ಈ ಬಗೆಯ ಬೌದ್ಧಿಕ ಬೆಳವಣಿಗೆ ನಿಜಕ್ಕೂ ಸಮಾಜಕ್ಕೆ ಮಾದರಿ. ಈತರದ ಕಾರ್ಯಕ್ರಮಗಳು ನಿತ್ಯನಿರಂತರವಾಗಿ ನಡೆಯಲಿ, ಮನುಷ್ಯ ಮನುಷ್ಯ ರನ್ನು ಅಂತಃಕರದಿAದ ಅಪ್ಪಿ ಮುದ್ದಾಡಲಿ, ಆಮೂಲಕ ಜಾತಿಯ ರೋಗವನ್ನು ದೂರ ಮಾಡಲಿ ಎಂದು ಹಾರೈಸಿದರು.
ಇಂಗ್ಲೀಷ್ ಉಪನ್ಯಾಸಕ ನರಸಿಂಹಮೂರ್ತಿ ಮಾತನಾಡಿ ಅಧ್ಯಾಪಕರು ಕೇವಲ ಪಾಠ ಪ್ರವಚಗಳಿಗಷ್ಟೇ ಸೀಮಿತವಾಗುವ ಬದಲು ವಿದ್ಯಾರ್ಥಿಗಳಲ್ಲಿ ಜೀವನಮೌಲ್ಯಗಳನ್ನು ತಂಬುವ ಕೆಲಸ ಮಾಡಬೇಕಿದೆ. ಇ ಕಾಮರ್ಸ್ ವಿದ್ಯಾರ್ಥಿಗಳ ಸಹಭೋಜನ ಕಾರ್ಯಕ್ರಮ ಆದರ್ಶದ, ಪ್ರತಿಯೊಬ್ಬರೂ ಅನುಕರಣೆ ಮಾಡಬಹುದಾದ ಸ್ತುತ್ಯಾರ್ಹ ಕಾರ್ಯವಾಗಿದೆ. ಈಥರದ ವಿದ್ಯಾರ್ಥಿಗಳ ಸಂಖ್ಯೆ ಸಾಸಿರವಾಗಲಿ, ಮಹಿಳಾ ಕಾಲೇಜಿನ ಕೀರ್ತಿ ಜಗದಗಲ ಹಬ್ಬಲಿ ಎಂದರು.
ಈ ವೇಳೆ ಅರ್ಥಶಾಸ್ತ್ರ ಪ್ರಾಧ್ಯಾಪಕ ಹರೀಶ್, ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರಾದ ಅಶ್ವತ್ಥ್ನಾ ರಾಯಣ್, ಶಿವಾನಂದ್ ಇಂಗ್ಲೀಷ್ ಪ್ರಾಧ್ಯಾಪಕ ಪ್ರೇಮಕುಮಾರ್, ಡಾ.ಪದ್ಮಕುಮಾರಿ, ಡಾ.ರಾಮಕೃಷ್ಣಪ್ಪ, ಕನ್ನಡ ಉಪನ್ಯಾಸಕ ಕೃಷ್ಣಮೂರ್ತಿ, ಮುನಿರಾಜು ಎಂ ಅರಿಕೆರೆ ಇದ್ದರು.