ಮದ್ಯ ಮತ್ತು ಇತರೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತ ವಿಚಾರ ಸಂಕಿರಣದಲ್ಲಿಅಭಿಮತ
ಮಾದಕ ಮತ್ತು ಮದ್ಯಪಾನ ಸೇರಿದಂತೆ ಇತರ ಕೆಟ್ಟ ವ್ಯಸನಗಳಿಗೆ ದಾಸರಾಗಲು ಯಾರು ಕಾರಣರಲ್ಲ ನಾವೇ ಕಾರಣರಾಗುವೆವು. ಯಾವುದೊ ಕೆಟ್ಟ ಪ್ರಲೋಭನೆಗಳಿಗೆ, ಸಹವಾಸ ದೋಷದಿಂದ ಅನಾರೋಗ್ಯಕರ ಕುತೂಹಲಗಳಿಗೆ ಮನಸ್ಸು ನೀಡಿ ವ್ಯಸನಗಳಿಗೆ ಬಲಿಯಾ ಗುತ್ತಿರುವುದು ಕಂಡುಬರುತ್ತಿದೆ. ಅದರ ಪರಿಣಾಮವು ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ

ಸುಸ್ಥಿರ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾಗರಿಕರೆಲ್ಲರೂ ಕೈ ಜೋಡಿಸಿ ಎಂದು ಡಿ.ಹೆಚ್.ಓ ಡಾ.ಮಹೇಶ್ ಕುಮಾರ್ ಮನವಿ ಮಾಡಿದರು.

ಚಿಕ್ಕಬಳ್ಳಾಪುರ: ಮಾನವನ ಜೀವನವು ಬಹು ದೊಡ್ಡದು ಅದನ್ನು ದುಷ್ಚಟಗಳಿಗೆ ದಾಸ ರಾಗಿ ಯಾರೊಬ್ಬರೂ ಜೀವನವನ್ನು ಹಾಳುಮಾಡಿಕೊಳ್ಳಬಾರದು, ಸುಸ್ಥಿರ, ಆರೋಗ್ಯಕರ ಸಮಾಜವನ್ನು ನಿರ್ಮಿಸಲು ವ್ಯಸನ ಮುಕ್ತರಾಗುವ ಮೂಲಕ ಎಲ್ಲರೂ ಸರ್ಕಾರದ ಆಶ ಯಕ್ಕೆ ಕೈಜೋಡಿಸಬೇಕೆಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮನವಿ ಮಾಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಬೇಡ್ಕರ್ ಸಭಾಂ ಗಣದಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು, ಚಿಕ್ಕಬಳ್ಳಾ ಪುರ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್.ಎಸ್.ಎಸ್. ಘಟಕ ೧ & ೨, ಚಿಕ್ಕಬಳ್ಳಾ ಪುರ ಹಾಗೂ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘ (ರಿ), ಇಡಗೂರು ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ “ಮದ್ಯ ಮತ್ತು ಇತರೆ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವಿಚಾರ ಸಂಕಿರಣ” ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಹೆರಿಗೆಯಾದ 9 ದಿನದ ನಂತರ ಸಾವು- ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ
ಮಾದಕ ಮತ್ತು ಮದ್ಯಪಾನ ಸೇರಿದಂತೆ ಇತರ ಕೆಟ್ಟ ವ್ಯಸನಗಳಿಗೆ ದಾಸರಾಗಲು ಯಾರು ಕಾರಣರಲ್ಲ ನಾವೇ ಕಾರಣರಾಗುವೆವು. ಯಾವುದೊ ಕೆಟ್ಟ ಪ್ರಲೋಭನೆಗಳಿಗೆ, ಸಹವಾಸ ದೋಷದಿಂದ ಅನಾರೋಗ್ಯಕರ ಕುತೂಹಲಗಳಿಗೆ ಮನಸ್ಸು ನೀಡಿ ವ್ಯಸನಗಳಿಗೆ ಬಲಿಯಾ ಗುತ್ತಿರುವುದು ಕಂಡುಬರುತ್ತಿದೆ. ಅದರ ಪರಿಣಾಮವು ವಯಸ್ಸಾದಂತೆ ದೈಹಿಕ ಮತ್ತು ಮಾನಸಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವೊಮ್ಮೆ ಮಾರಣಾಂತಿಕ ಕಾಯಿಲೆಗೂ ಒಳಗಾಗುವುದು ಕಾಣುತ್ತಿದ್ದೇವೆ ಇಂತಹ ಘಟನೆಯನ್ನು ಗಮನಿಸಿದ ಡಾ. ಮಹಾಂತಾ ಶಿವಯೋಗಿ ಅಜ್ಜನವರು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಬಹು ವರ್ಷಗಳ ಹಿಂದೆ ಯೇ ಕೈಗೊಂಡ "ಮಹಾಂತ ಜೋಳಿಗೆ ಕಾರ್ಯಕ್ರಮ" ಅತ್ಯಂತ ವಿಶಿಷ್ಟವಾದುದು ಎಂದರು.
ಕುಡಿತದ ಚಟದಿಂದ ಹಿಂದುಳಿದ ವರ್ಗದ ಯುವಕನೊಬ್ಬ ನಿಧನ ಹೊಂದಿದ ಸುದ್ದಿ ಕೇಳಿ ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದ ಸ್ವಾಮಿಗಳಿಗೆ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡರು. ಇಂತಹ ಸಾವಿರಾರು ಕುಟುಂಬಗಳು ಕುಡಿತ ಮತ್ತು ಇತರ ದುಷ್ಚಟಗಳಿಂದ ಹಾಳಾಗಿರುವುದನ್ನು ಅರಿತ ಶಿವಯೋಗಿಗಳು ದುಷ್ಚಟ ಗಳಿಗೆ ಒಳಗಾಗಿರುವವನ್ನು ಮುಕ್ತಿಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿ ಪಾನ್ ಬೀಡಾ, ಮದ್ಯಪಾನ, ಮಾದಕ ವಸ್ತು, ತಂಬಾಕು ವ್ಯಸನ ಗಳನ್ನು ತನ್ನ ಜೋಳಿಗೆಗೆ ನೀಡಿ ವ್ಯಸನ ಮುಕ್ತ ರಾಗಲು ಅಭಿಯಾನ ಆರಂಭಿಸಿ ಸ್ವಾಸ್ಥ್ಯ ಮತ್ತು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು.
ಕುಡಿತ ಚಟದಿಂದ ನಿಧನನಾದ ಯುವಕನ ಕೇರಿಗೆ ಹಾಗೂ ಅಲ್ಲಿನ ಗುಡಿಸಲು ಮನೆಗಳಿಗೆ ತೆರಳಿ ದುಷ್ಚಟಗಳ ದುಷ್ಪರಿಣಾಗಳ ಬಗ್ಗೆ ಅಲ್ಲಿನ ಜನತೆಗೆ ಮನ ಮುಟ್ಟುವಂತೆ ತಿಳುವಳಿಕೆ ನೀಡಿ ಮನಪರಿವರ್ತನೆ ಮಾಡಿದರು. ಆ ದಿಸೆಯಲ್ಲಿ ನಾವಿಂದು ಎಲ್ಲರೂ ಕಾರ್ಯೋ ನ್ಮುಖರಾಗಬೇಕಿದೆ ಎಂದರು.
ವ್ಯಸನಕ್ಕೆ ಒಳಗಾದವರು ತಮ್ಮ ಎಲ್ಲಾ ದುಷ್ಚಟಗಳ ವಸ್ತುಗಳನ್ನು ಸ್ವಾಮೀಜಿ ಅವರ ಜೋಳಿಗೆಗೆ ಹಾಕಿ, ಇನ್ನೆಂದೂ ಅವುಗಳನ್ನು ಬಳಸುವುದಿಲ್ಲ ಎಂದು ಪ್ರಮಾಣ ಮಾಡಿದರು ಅಂತಹ ಅರ್ಥಪೂರ್ಣ ಕಾರ್ಯವನ್ನು ಮಾಡಿ ಶಿವಯೋಗಿಗಳು ಸಮಾಜದಲ್ಲಿ ವಿಶಿಷ್ಟ ಪಂಕ್ತಿಯ ಸ್ಥಾನ ಪಡೆದಿದ್ದಾರೆ. ಜಾತಿ-ಮತ,ಪಂಗಡ,ಧರ್ಮ,ಭಾಷೆಗಳ ತಾರತಮ್ಯ ಮಾಡದೇ ೪೨ ವರ್ಷಗಳ ಕಾಲ ದೇಶ ಹಾಗೂ ವಿದೇಶಗಳು ಸೇರಿದಂತೆ ಡಾ.ಮಹಾಂತರು ಜೋಳಿಗೆ ಹಿಡಿದು ಜನರಲ್ಲಿನ ದುಷ್ಚಟಗಳ ಭಿಕ್ಷೆ ಬೇಡಿದರು ಇಂತಹ ವಿಚಾರಗಳಿಂದ ನಾವೆಲ್ಲರೂ ಪ್ರಭಾವಿತರಾಗಿ ಸಮಾಜದ ಪರಿವರ್ತನೆಗೆ ಕಾರಣರಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುನಿ ರಾಜು ಮಾತನಾಡಿ, ಯುವ ಸಮುದಾಯ ಮಾದಕ ವ್ಯಸನಿಗಳಾಗುತ್ತಿರುವುದು ನೋವಿನ ಸಂಗತಿಯಾಗಿದ್ದು ದುಷ್ಚಟಗಳಿಂದ ದೂರವಿರಬೇಕು, ಪರಿಶ್ರಮ ಪಟ್ಟು ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕು. ಇತ್ತೀಚಿಗೆ ಮೊಬೈಲ್ ಬಳಕೆಯು ಸಹ ಯುವ ಸಮುದಾಯದ ಮೇಲೆ ಅತಿ ಹೆಚ್ಚಿನ ದುಷ್ಪರಿಣಾಮ ಬೀರುತ್ತಿದೆ. ಕೆಲವರು ಈ ಗೀಳಿನಿಂದ ಪ್ರಾಣವನ್ನೆ ಕಳೆದು ಕೊಂಡಿದ್ದಾರೆ. ಮಾಹಿತಿ ಹಾಗೂ ಜ್ಞಾನ ಸಂಗ್ರಹಕ್ಕಾಗಿ ಅಥವಾ ಇತರ ಅತ್ಯಗತ್ಯ ಉದ್ಧೇ ಶಕ್ಕಷ್ಟೆ ಮೊಬೈಲ್ ಅನ್ನು ಬಳಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಜಿ. ಹೇಮಂತ್ ಕುಮಾರ್ ಅವರು ತಂಬಾಕು, ಮಾದಕ ಹಾಗೂ ಮದ್ಯ ವ್ಯಸನದ ದುಷ್ಚಟಗಳ ಅಡ್ಡ ಪರಿಣಾಮಗಳ ಬಗ್ಗೆ ಶಕ್ತಿ ಬಿಂದು ಪ್ರದರ್ಶನ ನೀಡಿ ವಿದ್ಯಾರ್ಥಿಗಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಟ ರೋಗ ನಿಯಂತ್ರಣಾಧಿಕಾರಿ ಡಾ.ಶಿವಕುಮಾರ್, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯರಾದ ಡಾ.ಜಿ.ಹೇಮಂತ್ ಕುಮಾರ್, ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಹಾಗೂ ಸಹ ಪ್ರಾಧ್ಯಾಪಕರಾದ ಡಾ. ನಾಗರಾಜ್, ಡಾ. ನಾಗೇಂದ್ರ, ಪ್ರಾಧ್ಯಾಪಕರಾದ ರಂಗಪ್ಪ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಎಂ.ಆರ್ ಮಂಜುನಾಥ, ಉಪನ್ಯಾಸಕ ಸದಾಶಿವ ಆರಾಧ್ಯ, ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಲಾತಂಡದ ಕಲಾವಿದರಾದ ಪ್ರಸನ್ನ ಕುಮಾರ್, ಚಂದ್ರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.