ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅನ್‌ಬಾಕ್ಸ್‌ ಕಾರ್ಯಕ್ರಮಕ್ಕೂ ಮುನ್ನ ಗಾಯಕ ಸಂಜಿತ್‌ಗೆ ವಿಶೇಷ ಮನವಿ ಮಾಡಿದ ಆರ್‌ಸಿಬಿ ಅಭಿಮಾನಿಗಳು

Rcb Unbox Event 2025: ಇಂದು ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಹಾಡಲಿರುವ ಗಾಯಕ ಸಂಜಿತ್​ ಹೆಗ್ಡೆಗೆ, ಆರ್‌ಸಿಬಿ ಅಭಿಮಾನಿಗಳು 'ಅಣ್ಣಾ ಸಂಜಿತ್ ಹೆಗ್ಡೆ RCB Unbox Event ಅಲ್ಲಿ ದಯವಿಟ್ಟು"ಸೋತೆ ಹೋದೆ ಸೋತೆ ಹೋದೆ" ಸಾಂಗ್ ಮಾತ್ರ ಹಾಡಬೇಡಿ. ಕಳೆದ 17 ವರ್ಷದಿಂದ ಸೋಲ್ತಾನೆ ಇದ್ದಿವಿ" ಎಂದು ಮನವಿ ಮಾಡಿದ್ದಾರೆ. ಈ ಪೋಸ್ಟ್‌ ಎಲ್ಲಡೆ ವೈರಲ್‌ ಆಗಿದೆ.

ಗಾಯಕ ಸಂಜಿತ್​ ಹೆಗ್ಡೆಗೆ ವಿಶೇಷ ಮನವಿ ಮಾಡಿದ ಆರ್‌ಸಿಬಿ ಅಭಿಮಾನಿಗಳು

Profile Abhilash BC Mar 17, 2025 10:33 AM

ಬೆಂಗಳೂರು: ಕಳೆದ 17 ವರ್ಷಗಳಿಂದ ಒಂದೇ ಒಂದು ಐಪಿಎಲ್‌(IPL 2025) ಪ್ರಶಸ್ತಿ ಗೆಲ್ಲದ ಆರ್‌ಸಿಬಿ(RCB) ಇದೀಗ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್​ ಗೆಲ್ಲುವ ಮೂಲಕ ಅಭಿಮಾನಿಗಳ ಪ್ರೀತಿಗೆ ಋಣ ಸಂದಾಯ ಮಾಡುವ ಹಂಬಲದೊಂದಿಗೆ ಈ ಬಾರಿಯ ಟೂರ್ನಿಯನ್ನಾಡಲು ಸಜ್ಜಾಗಿ ನಿಂತಿದೆ. ಇಂದು(ಮಾ.17) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಅನ್‌ಬಾಕ್ಸ್‌(RCB Unbox Event 2025) ಕಾರ್ಯಕ್ರಮದಲ್ಲಿ ಆರ್​ಸಿಬಿ ತಂಡ ಮತ್ತು ಅಭಿಮಾನಿಗಳು ಸಮಾಗಮ ಆಗಲಿದ್ದಾರೆ. ಈ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಅಭಿಮಾನಿಗಳು ಗಾಯಕ ಸಂಜಿತ್​ ಹೆಗ್ಡೆಗೆ ಮಾಡಿದ ಮನವಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಸಂಜೆ 4 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಗೀತ ಸುಧೆಯೂ ಹರಿಯಲಿದೆ. ರಾಜ್ಯದ ಜನಪ್ರಿಯ ಗಾಯಕ ಸಂಜಿತ್​ ಹೆಗ್ಡೆ, ಗಾಯಕಿ ಐಶ್ವರ್ಯ ರಂಗರಾಜನ್​ ಜತೆಗೆ ಕೇರಳದ ಪ್ರಸಿದ್ಧ ರ್ಯಾಪರ್​ ಹನುಮಕಿಂಡ (ಸೂರಜ್​ ಚೆರುಕಟ್​) ಮತ್ತು ಆಸ್ಟ್ರೆಲಿಯಾದ ಡಿಜೆ, ಸಂಗೀತಕಾರ ಟಿಮ್ಮಿ ಟ್ರಂಪೆಟ್​ (ಟಿಮೋಥಿ ಜುಡ್​ ಸ್ಮಿತ್​) ಸಂಗೀತದೊಂದಿಗೆ ಮನರಂಜನೆ ಒದಗಿಸಲಿದ್ದಾರೆ.

ಇಂದು ಆರ್‌ಸಿಬಿ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಹಾಡಲಿರುವ ಗಾಯಕ ಸಂಜಿತ್​ ಹೆಗ್ಡೆಗೆ, ಆರ್‌ಸಿಬಿ ಅಭಿಮಾನಿಗಳು 'ಅಣ್ಣಾ ಸಂಜಿತ್ ಹೆಗ್ಡೆ RCB Unbox Event ಅಲ್ಲಿ ದಯವಿಟ್ಟು"ಸೋತೆ ಹೋದೆ ಸೋತೆ ಹೋದೆ" ಸಾಂಗ್ ಮಾತ್ರ ಹಾಡಬೇಡಿ. ಕಳೆದ 17 ವರ್ಷದಿಂದ ಸೋಲ್ತಾನೆ ಇದ್ದಿವಿ" ಎಂದು ಮನವಿ ಮಾಡಿದ್ದಾರೆ. ಈ ಪೋಸ್ಟ್‌ ಎಲ್ಲಡೆ ವೈರಲ್‌ ಆಗಿದೆ.



ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಸಹಿತ ಎಲ್ಲ ಆಟಗಾರರ ಅಭ್ಯಾಸವನ್ನು ವೀಸುವ ಅವಕಾಶ ಪಡೆಯಲಿದ್ದಾರೆ. ಜತೆಗೆ ತಂಡದ ಹೊಸ ಜೆರ್ಸಿ ಅಧಿಕೃತವಾಗಿ ಅನಾವರಣಗೊಳ್ಳುವ ನಿರೀಕ್ಷೆ ಇದೆ.

ಕಳೆದ ದೇಶೀಯ ಕ್ರಿಕೆಟ್​ ಋತುವಿನ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಧ್ಯಪ್ರದೇಶ ತಂಡವನ್ನು ಫೈನಲ್​ಗೇರಿಸಿದ್ದ ರಜತ್​ ಪಾಟೀದಾರ್​ ತಮ್ಮ ಚೊಚ್ಚಲ ಐಪಿಎಲ್‌ ನಾಯಕತ್ವದಲ್ಲಿ ಆರ್‌ಸಿಬಿಗೆ ಚೊಚ್ಚಲ ಕಪ್‌ ಗೆಲ್ಲಿಸಿ ಕೊಟ್ಟಾರೆ ಎಂದು ಕಾದು ನೋಡಬೇಕಿದೆ. ಆರ್‌ಸಿಬಿ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 22 ರಂದು ಹಾಲಿ ಚಾಂಪಿಯನ್‌ ಕೆಕೆಆರ್‌ ವಿರುದ್ಧ ಆಡಲಿದೆ. ಇದು ಈ ಆವೃತ್ತಿಯ ಉದ್ಘಾಟನ ಪಂದ್ಯವಾಗಿದೆ.

ಇದನ್ನೂ ಓದಿ IPL 2025: ಕೆಜಿಎಫ್ ಹಾಡಿನೊಂದಿಗೆ ಎಂಟ್ರಿ; ಎದುರಾಳಿ ತಂಡಕ್ಕೆ ಎಚ್ಚರಿಕೆ ಕೊಟ್ಟ ಕರುಣ್ ನಾಯರ್‌

ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್‌ ಇಲೆವೆಲ್‌

ವಿರಾಟ್​ ಕೊಹ್ಲಿ, ಫಿಲ್​ ಸಾಲ್ಟ್​, ರಜತ್​ ಪಾಟೀದಾರ್​ (ನಾಯಕ), ಲಿಯಾಮ್​ ಲಿವಿಂಗ್​ಸ್ಟೋನ್​, ಜಿತೇಶ್​ ಶರ್ಮ (ವಿ.ಕೀ), ಟಿಮ್​ ಡೇವಿಡ್, ಕೃನಾಲ್​ ಪಾಂಡ್ಯ, ಭುವನೇಶ್ವರ್​ ಕುಮಾರ್​, ಸುಯಶ್​ ಶರ್ಮ, ಜೋಶ್​ ಹ್ಯಾಸಲ್​ವುಡ್​, ಯಶ್​ ದಯಾಳ್​.