ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಮಂಗನ ದಾಳಿ: ಕಾರ್ಮಿಕನ ಕಾಲಿಗೆ ಕಚ್ಚಿ ಗಂಭೀರ ಗಾಯ

ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ‌ ಕಾರ್ಮಿಕ ತನ್ನ, ಕೆಲಸ ಮುಗಿಸಿ ಮನೆಗೆ ವಾಪಸ್ ಆಗಬೇಕು ಎನ್ನುವ ವೇಳೆ‌ ಕಾರ್ಮಿಕನಾದ‌ ಅಂಬೇವಾಡಿಯ ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಎಂಬುವವರ ಮೇಲೆ‌‌ ಮಂಗ ದಾಳಿ‌ ನಡೆಸಿದ‌ ಮಂಗ ಆತನ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ.

ಮಂಗನ ದಾಳಿ: ಕಾರ್ಮಿಕನ ಕಾಲಿಗೆ ಕಚ್ಚಿ ಗಂಭೀರ ಗಾಯ

Profile Ashok Nayak Mar 31, 2025 1:22 PM

ದಾಂಡೇಲಿ : ನಗರದ ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾರ್ಮಿಕನ ಮೇಲೆ ಮಂಗ ದಾಳಿ ನಡೆಸಿದ್ದು, ಆತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಎಸ್ಐ ಆಸ್ಪತ್ರೆಯ ಆವರಣದಲ್ಲಿ ಕಾಂಕ್ರೀಟ್ ಕೆಲಸ ಮಾಡುತ್ತಿದ್ದ‌ ಕಾರ್ಮಿಕ ತನ್ನ, ಕೆಲಸ ಮುಗಿಸಿ ಮನೆಗೆ ವಾಪಸ್ ಆಗಬೇಕು ಎನ್ನುವ ವೇಳೆ‌ ಕಾರ್ಮಿಕನಾದ‌ ಅಂಬೇವಾಡಿಯ ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಎಂಬವರ ಮೇಲೆ‌‌ ಮಂಗ ದಾಳಿ‌ ನಡೆಸಿ, ಆತನ ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ದಾಳಿಗೆ ಒಳಗಾಗಿ ಗಂಭೀರ ಗಾಯಗೊಂಡ‌ ಪ್ರವೀಣ್ ಅವರನ್ನ ತಕ್ಷಣ ಇಎಸ್ಐ ಆಸ್ಪತ್ರೆ ದಾಖಲಿಸಿ‌ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: Sikandar Movie: 'ಸಿಕಂದರ್‌' ರಿಲೀಸ್‌ ಬೆನ್ನಲ್ಲೇ ಸಲ್ಮಾನ್‌ ಖಾನ್‌ಗೆ ಶಾಕ್‌ ಕೊಟ್ಟ ಹ್ಯಾಕರ್ಸ್‌; ಆನ್‌ಲೈನ್‌ನಲ್ಲಿ ಎಚ್‌ಡಿ ಪ್ರಿಂಟ್‌ ಲೀಕ್‌

ಮಂಗನ ದಾಳಿಗೆ ಒಳಗಾಗಿರುವ ಪ್ರವೀಣ ಕುಟುಂಬಕ್ಕೆ‌ಅರಣ್ಯ ಇಲಾಖೆಯಿಂದ‌ ಪರಿಹಾರ ನೀಡುವು ದರ ಜೊತೆಗೆ ಜನರಿಗೆ ಕಾಟ ನೀಡುತ್ತಿರುವ ಮಂಗಗಳನ್ನ ಹಿಡಿದು ಬೇರೆ ಕಡೆ ಬಿಡುವ‌ ಕೆಲಸ ಮಾಡ ಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.