Vishwavani Editorial: ಜನಕಲ್ಯಾಣಕ್ಕೆ ಅಭಿಯಾನವಾಗಲಿ

ಒಟ್ಟಿನಲ್ಲಿ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುವಂತೆ ‘ಭಿತ್ತಿಪತ್ರ ಸಮರ’ಕ್ಕೂ ಒಂದು ಕಾಲ ಎಂದು ಉದ್ಗರಿಸಿ ಶ್ರೀಸಾಮಾನ್ಯರು ಕೈತೊಳೆದುಕೊಳ್ಳಬೇಕೇ?

image-9dfe67c9-c82a-4233-b136-0edd4a6eea84.jpg
Profile Ashok Nayak Jan 2, 2025 9:49 AM
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆಯವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ‘ಪೋಸ್ಟರ್ ಅಭಿಯಾನ’ ನಡೆದ ಸುದ್ದಿಯನ್ನು ನೀವು ಓದಿದ್ದೀರಿ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿಯ ಸರಕಾರವಿದ್ದಾಗ ಮತ್ತು ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿ ಯಾಗಿದ್ದಾಗ ‘40 ಪರ್ಸೆಂಟ್ ಸಿಎಂ’, ‘ಪೇ ಸಿಎಂ’ ಎಂಬೆಲ್ಲ ಉದ್ಘೋಷಗಳನ್ನು ಒಳಗೊಂಡಿದ್ದ ಇಂಥದೇ ‘ಭಿತ್ತಿಪತ್ರ ಸಮರ’ಕ್ಕೆ ಕಾಂಗ್ರೆಸ್ ಮುಂದಾಗಿತ್ತು. ಒಟ್ಟಿನಲ್ಲಿ, ‘ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ’ ಎನ್ನುವಂತೆ ‘ಭಿತ್ತಿಪತ್ರಸಮರ’ಕ್ಕೂ ಒಂದು ಕಾಲ ಎಂದು ಉದ್ಗರಿಸಿ ಶ್ರೀಸಾಮಾನ್ಯರು ಕೈತೊಳೆದುಕೊಳ್ಳಬೇಕೇ? ರಾಜಕೀಯ ಪಕ್ಷಗಳು ತಂತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲೆಂದೋ ಜನಮನವನ್ನು ಸೆಳೆಯಲೆಂದೋ ಈ ಬಗೆಯ ಕಸರತ್ತುಗಳಿಗೆ ಮುಂದಾಗುವುದು ಹೊಸದೇನಲ್ಲ; ಆದರೆ ಇದರಿಂದ ಶ್ರೀಸಾಮಾನ್ಯರಿಗೆ ಪ್ರಯೋಜನವಾಗುವುದೇ? ರಾಜಕೀಯ ಕ್ಷೇತ್ರ ಎಂದ ಮೇಲೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಎಂಬ ಎರಡು ಪ್ರತ್ಯೇಕ ಅಸ್ತಿತ್ವಗಳು ಇರಬೇಕಾದ್ದು, ಅವುಗಳ ನಡುವೆ ಟೀಕೆ-ಟಿಪ್ಪಣಿಗಳ ವಿನಿಮಯ ವಾಗುವಂಥದ್ದೂ ಸಹಜವೇ.
ಆದರೆ ವರ್ಷಪೂರ್ತಿ ಕೆಸರೆರಚಾಟದಲ್ಲೇ ತೊಡಗಿದ್ದರೆ, ಜನಕಲ್ಯಾಣದ ಧ್ಯೇಯಕ್ಕೆ ಬಲ ತುಂಬುವವರಾರು? ಜನರಹಿತರಕ್ಷಣೆಯ ನೆಲೆಯಲ್ಲಿ ರಾಜ್ಯದಲ್ಲಿ ಆಗಬೇಕಿರುವ ಕೆಲಸ-ಕಾರ್ಯಗಳು ಮೂಟೆಗಟ್ಟಲೆ ಇವೆ; ಅವುಗಳ ಕಡೆಗೆ ಗಮನಹರಿಸುತ್ತ, ಪರಿಹಾರೋಪಾಯ ಕಂಡುಕೊಳ್ಳುವುದಕ್ಕೆ ಎಷ್ಟು ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿ ದರೂ ಸಾಲದು.
ಆದ್ದರಿಂದ, ನಮ್ಮ ತಥಾಕಥಿತ ಜನನಾಯಕರು ಜನಕಲ್ಯಾಣವನ್ನು ಆದ್ಯತೆಯಾಗಿ ಇಟ್ಟುಕೊಳ್ಳಲಿ; ರಾಜಕೀಯ ಹಿತಾಸಕ್ತಿಯ ಅದೇನೇ ಆಂದೋಲನಗಳಿದ್ದರೂ ಅದಕ್ಕೆ ಹೆಚ್ಚಿನ ಸಮಯ ವ್ಯಯವಾಗುವುದು ಬೇಡ ಎಂಬುದು ಸಹೃದಯಿಗಳ ಆಶಯ.
ಇದನ್ನು ಓದಿ: Priyank Kharge
Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Rajath Kishan (2)
7:07 AM January 30, 2025

BBK11 Rajath Kishan: ನಂದೂ ಹಳೆ ಕತೆಗಳಿವೆ.. ಆದರೆ ಆ ಹುಡುಗಿಯ ಫೋಟೊ ಬಿಡಬಾರದಿತ್ತು: ರಜತ್